ಕಂದ ಬಾಬಾ ನಂದ ಬಾಬಾ

ಕಂದ ಬಾಬಾ ನಂದ ಬಾಬಾ
ಪುಟ್ಟ ಗಿಣಿಮರಿ ಸುಂದರಾ
ಓಡಿ ಬಾಬಾ ಕೈಯ ತಾತಾ
ಆತ್ಮಗುಬ್ಬಿಯ ಚಂದಿರಾ

ಕಲ್ಲುಸಕ್ಕರೆ ಮೆಲ್ಲುತಿರುವೆನು
ಕುಂಟ ಕಳ್ಳನೆ ಕಂದನೆ
ಎನ್ನ ಸೀರಿಯ ನಿರಿಗೆ ಮರೆಯಲಿ
ಮುಸುಡಿ ಮುಚ್ಚುವ ತುಂಟನೆ

ಎನ್ನ ಬಯಕೆಯ ನೂರು ಪಕಳಿಯ
ಬಿಚ್ಚಿ ನಿನ್ನನು ಹಡೆದನು
ಎನ್ನ ಹೆಣ್ತನವಾಯ್ತು ತಾಯ್ತನ
ಎದೆಯ ಹಾಲನು ಎರೆದೆನು

ನಾನು ಸುಂದರಿ ಎಂಬ ಮಾತೇ
ಮರೆತು ಹೋಯಿತು ಹುಟ್ಟಿನಿಂ
ನನ್ನ ಕೋಮಲ ಕುಚದ ಹಂಡೆಯು
ಎಡೆಯು ಆಯಿತು ಗುಟ್ಟಿನಿಂ

ನನ್ನ ಮಾಯದ ಗಂಡ ಎಳೆದಾ
ತುರುಬ ನೀನೀ ಕಟ್ಟಿದೆ
ನನ್ನ ಬಂಡನ ಗಂಡ ಗರುವನ
ಬೆಪ್ಪ ಕಪ್ಪೆಯ ಮಾಡಿದ

ಆ ನಾದಿನಿ ಭಾವ ಮೈದುನ
ಮಾವ ಮುಂಗುಲಿಯಾದರು
ಮನೆಗೆ ನೀನೇ ರಾಜತೇಜಾ
ನಿನ್ನ ಉಚ್ಚೆಯ ಬಳೆದರು

ಚೋಟು ಹುಡುಗಾ ಬೋಟು ಬೆಡಗಾ
ಏನು ಜೋರೋ ನಿನ್ನದು
ನೀನು ಅತ್ತರೆ ಮನೆಯ ಚತ್ತರಿ
ಗಿಮ್ಮಿ ಗಿರಿಗಿರಿ ಎನುವದು

ನೀನೆ ಬಿಂಗರಿ ನೀನೆ ಸಿಂಗರಿ
ನೀನೆ ಬೀಗರ ಬೀಗನೂ
ಕಡಬು ಹೋಳಿಗೆ ಉಂಡಿ ಚಕ್ಕುಲಿ
ತಟ್ಟಿ ಬುಟ್ಟಿಗೆ ಒಡೆಯನೊ

ಎಲ್ಲ ಖಾರಾ ಖೀರು ಪಾಯಸ
ಅಡುಗೆ ಮನೆಯೆ ನಿನ್ನದು
ನಾನು ಮಾಡಿದ ಮಾಯದಡುಗೆಯು
ಇನ್ನು ಮೀಸಲು ನಿನ್ನದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರ ಹೊರಗೆ
Next post ಇವನು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys